ಚಿಕ್ಕೋಡಿ : ಪ್ರಸ್ತುತ ರಾಜ್ಯದ ಜನತೆ ವಿಸಾ ಪಡೆದುಕೊಳ್ಳಬೇಕಾದರೇ ಚೆನ್ನೈ ಅಥವಾ ಮುಂಬೈಗೆ ಹೋಗಬೇಕಾದ ಅನಿವಾರ್ಯತೆ ಇದೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ವಿಸಾ ನೀಡುವ ಕಚೇರಿ ಪ್ರಾರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು. ಪಟ್ಟಣದ ಕೇಂದ್ರೀಯ ಅಂಚೆ ಕಛೇರಿಯಲ್ಲಿ ಶುಕ್ರವಾರ ಪಾಸಪೋಟ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿ ಪಾಸಪೋರ್ಟ ಕಛೇರಿ ಪ್ರಾರಂಭದ ವೇಳೆಯೇ ಜಿಲ್ಲಾ ಕೇಂದ್ರವಾಗಲಿರುವ ಚಿಕ್ಕೋಡಿಯಲ್ಲಿಯೂ ಪಾಸಪೋರ್ಟ ಕಛೇರಿ ಆರಂಭಿಸಬೇಕೆಂದು ಸಂಬಂಧ ಪಟ್ಟ ಇಲಾಖೆಗೆ ಮನವಿ ಮಾಡಿದ್ದೆ. […]
ಬೆಳಗಾವಿ: ಅನಾಮಿಕ ವ್ಯಕ್ತಿಗಳು ಮೈಸೂರು ಸೇರಿದಂತೆ ರಾಜ್ಯದ 3 ಪ್ರಮುಖ ರೈಲ್ವೆ ನಿಲ್ದಾಣದಲ್ಲಿ ಹುಸಿ ಬಾಂಬ್ ಕರೆ ಮಾಡಿರುವ ಹಿನ್ನಲೆ ನಗರದ ಪೊಲೀಸರು ಹೈಅಲರ್ಟ್ ಆಗಿದ್ದು, ಇಲ್ಲಿನ ರೈಲ್ವೆ ನಿಲ್ದಾಣ ಪರಿಶೀಲನೆ ನಡೆಸಿದ್ದಾರೆ. 30 ಕ್ಕೂ ಹೆಚ್ಚು ಪೊಲೀಸರು ಶ್ವಾನದಳದೊಂದಿಗೆ ನಗರದ ರೈಲ್ವೆ ನಿಲ್ದಾಣ ಮತ್ತು ಗೋವಾ ಹಾಗೂ ಮಹಾರಾಷ್ಟ್ರದ ಗಡಿ ವರಗೆ ತಪಾಸಣೆ ನಡೆಸಿದ್ದಾರೆ. ಅಮೀತhttp://udayanadu.com
ರಾಮದುರ್ಗ: ನಿನ್ನೆ ನಿಧನರಾದ ರಾಮದುರ್ಗದ ಮಾಜಿ ಶಾಸಕಿ ಶಾರಮ್ಮ ಪಟ್ಟಣ ಅವರ ಅಂತ್ಯಕ್ರಿಯೆ ಇಂದು ಗುರುವಾರ ಸಂಜೆ 6.30 ಕ್ಕೆ ರಾಮದುರ್ಗದ ಹೊರವಲಯದಲ್ಲಿರುವ ದೊಡಮಂಗಡಿ ಗ್ರಾಮದ ಅವರ ಜಮೀನಿನಲ್ಲಿ ನೆರವೇರಿಸಲಾಯಿತು. ಶಾರಮ್ಮ ಅವರ ಪುತ್ರ ,ಕಾಂಗ್ರೆಸ್ ಮುಖಂಡ,ಮಾಜಿ ಶಾಸಕ ಅಶೋಕ ಪಟ್ಟಣ ಅವರು ಪ್ರಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಷ ಮಾಡಿದರು. ಶಾರಮ್ಮ ಪಟ್ಟಣ ಅವರ ಇಚ್ಛೆಯಂತೆಯೇ ಪ್ರಾರ್ಥಿವ ಶರೀರವನ್ನು ಸಮಾಧಿ ಮಾಡದೇ ಅಗ್ನಿಗೆ ಅರ್ಪಿಸಲಾಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಗೃಹ ಸಚಿವ ಎಮ್.ಬಿ.ಪಾಟೀಲ,ಶಾಸಕರು,ಮಾಜಿ ಶಾಸಕರು ದಿವಂಗತರಿಗೆ ಅಂತಿಮ ನಮನ ಸಲ್ಲಿಸಿದರು. […]
ಬೆಳಗಾವಿ: ಈ ಹಿಂದೆ ಧಾರವಾಡದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ 2006 ರ ಕೆಎಎಸ್ ಬ್ಯಾಚ್ನ ಇಬ್ರಾಹಿಂ ಮೈಗೂರು ಅವರು ಗುರುವಾರ ಬೆಳಗಾವಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿ ಕಾರ್ಯ ನಿರ್ವಹಿಸಿದರು. ನಿಕಟಪೂರ್ವ ಆಯುಕ್ತ ಶಶಿಧರ ಕುರೇರ ಅವರು ವರ್ಗಾವಣೆ ಆದ ಹಿನ್ನಲೆಯಲ್ಲಿ ಇಬ್ರಾಹಿಂ ಮೈಗೂರು ಅವರು ಮಹಾನಗರ ಪಾಲಿಕೆ ಆಯುಕ್ತರಾಗಿ ಸರಕಾರ ನೇಮಕ ಮಾಡಿದೆ. ನೇ ಅಮೀತhttp://udayanadu.com
ಬೆಳಗಾವಿ: ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ನೀಡಿದ ಚೆಕ್ ಗಳು ಬೌನ್ಸ್ ಆಗಿದ್ದು, ಕಾರ್ಖಾನೆಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಮದುರ್ಗದ ಶಿವಸಾಗರ ಸಕ್ಕರೆಯಿಂದ ರೈತರಿಗೆ ನೀಡಲಾಗಿರುವ ಚೆಕ್ ಗಳು ಬೌನ್ಸ್ ಆಗಿವೆ. ಸಕ್ಕರೆ ಕಾರ್ಖೆನೆಗಳ ವಿರುದ್ದ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಶಿವಸಾಗರ ಸಕ್ಕರೆ ಕಾರ್ಖಾನೆ 2016 ನೇ ಸಾಲಿನ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದ್ದು, ಈ ಹಿಂದೆ ರೈತರು ಪ್ರತಿಭಟನೆ ನಡೆಸಿದಾಗ ರೈತರಿಗೆ ಚೆಕ್ […]
ಗೋಕಾಕ: ತಾಲೂಕಿನ ಹೊನಕುಪ್ಪಿ ಗ್ರಾಮದಲ್ಲಿ ಜಿ.ಪಂ. ಅನುದಾನದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶಾಸಕರ ಅನುದಾನದಲ್ಲಿ 2ಲಕ್ಷ ರೂ. ವೆಚ್ಚದ ಹೈಮಾಸ್ಕ್ ಎಲ್ಇಡಿ ವಿದ್ಯುತ್ ಬಲ್ಬ ಅಳವಡಿಕೆ ಕಾಮಗಾರಿಗೆ ಸುಣಧೋಳಿ ತಾ.ಪಂ. ಸದಸ್ಯ ರಮೇಶ ಗಡಗಿ ಹಾಗೂ ಗ್ರಾ.ಪಂ. ಸದಸ್ಯ ಸುರೇಶ ಸಣ್ಣಕ್ಕಿ ಜಂಟೀಯಾಗಿ ಚಾಲನೆ ನೀಡಿದರು. ನಂತರ ಮಾತನಾಡಿದ ಗ್ರಾ.ಪಂ. ಸದಸ್ಯ ಸುರೇಶ ಸಣ್ಣಕ್ಕಿ ಅವರು ಬೇಸಿಗೆ ಕಾಲ ಬಂತೆಂದರೆ ಕುಡಿಯುವ ನೀರಿಗಾಗಿ […]
ಗೋಕಾಕ: ತಾಲೂಕಿನ ಮೆಳವಂಕಿ ಗ್ರಾಮದಲ್ಲಿ ಇತ್ತಿಚೀಗೆ ಸಿದ್ಧಾರೂಢ ಮಠದ ಮೂರ್ತಿ ಪ್ರತಿಷ್ಠಾಪನೆಯನ್ನು ನೆರವೇರಿಸಲಾಯಿತು. ಅಂಕಲಗಿ, ಜಮಖಂಡಿ, ಉಪ್ಪಾರಹಟ್ಟಿ, ಮಮ್ಮಟಗೇರಿ ಹಾಗೂ ತುಕ್ಕಾನಟ್ಟಿ ಗ್ರಾಮಗಳ ಸ್ವಾಮೀಜಿಗಳು ಈ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಾಗಪ್ಪ ಶೇಖರಗೋಳ, ಅಲ್ಲಪ್ಪ ಕಂಕಣವಾಡಿ, ಸಿದ್ದಪ್ಪ ಹಂಜಿ, ಸತ್ತೆಪ್ಪ ಬಬಲಿ, ಈರಪ್ಪ ಬೀರನಗಡ್ಡಿ, ಭೀಮಪ್ಪ ಚಿಪ್ಪಲಕಟ್ಟಿ, ರಾಮಪ್ಪ ಕಾಪಸಿ, ದೊಡ್ಡಪ್ಪ ಕರೆಪ್ಪನವರ, ರಾಮಚಂದ್ರ ಪತ್ತಾರ, ಮಹಾನಿಂಗ ಚಿಪ್ಪಲಕಟ್ಟಿ, ರಮೇಶ ಬೀರನಗಡ್ಡಿ, ಮುಂತಾದವರು ಉಪಸ್ಥಿತರಿದ್ದರು. udayanadu2016
ಬೆಳಗಾವಿ: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕಾಲೇಜು ವಿಧ್ಯಾರ್ಥಿಗಳಿಂದ ಶೃದ್ಧಾಂಜಲಿ ನೀಡಲಾಯಿತು. ಇಲ್ಲಿನ ಆರ್ ಪಿಡಿ ವೃತ್ತದಲ್ಲಿ ಆರ್. ಪಿಡಿ ಮತ್ತು ಗೋಮಟೇಶ ಕಾಲೇಜು ವಿದ್ಯಾರ್ಥಿಗಳಿಂದ 2 ನಿಮಿಷಗಳ ಕಾಲ ಮೌನಾಚರಣೆಯನ್ನು ಮಾಡಿ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು. ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿ ಪಾಕ್ ಧ್ವಜಕ್ಕೆ ಬೆಂಕಿ ಹಚ್ಚಿದ ವಿದ್ಯಾರ್ಥಿಗಳು ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು. ವಾಲ್ಮೀಕಿ ಯುವ ವೇದಿಕೆ ಕರ್ನಾಟಕ ಅಧ್ಯಕ್ಷ ವಿಜಯ ತಳವಾರ್, ಈಶ್ವರ ಪಾಟೀಲ, ರಾಜು ಯರಗಾಂವಿ ನೇತೃತ್ವ ವಹಿಸಿದ್ದರು. […]
ಬೆಳಗಾವಿ: ಸರ್ವಜ್ಞರಂತಹ ಸಂತರು ನಮಗೆ ಬಿಟ್ಟುಹೋದಂತಹ ತತ್ವ- ಸಿದ್ಧಾಂತಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಸಂಸದ ಸುರೇಶ ಅಂಗಡಿ ಅವರು ಹೇಳಿದರು. ನಗರದ ಕುಮಾರ ಗಂಧರ್ವ ಕಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂತಕವಿ ಸರ್ವಜ್ಞರು ಯಾವುದೇ ಸಂಸ್ಕøತ ಭಾಷೆ ಕಲಿಯದೇ ಕನ್ನಡವನ್ನು ಕಲಿತು ವಚನ ಸಾಹಿತ್ಯವನ್ನು ಇಡಿ ವಿಶ್ವಕ್ಕೆ ಸಾರಿದ ಮಹಾನ್ ಸಂತ. ‘ಸರ್ವಜ್ಞರು ಹೇಳದ […]
ಗೋಕಾಕ: ಸರ್ವಜ್ಞ ಜಗತ್ತಿನ ಮಹಾನ ದಾರ್ಶನಿಕ ಜಗತ್ತಿನ ಎಲ್ಲ ಸಮಾಜ ಸುಧಾರಣೆಗೆ ತ್ರಿಪದಿಗಳ ಮೂಲಕ ನೀಡಿದ ವಚನ ಸಾಹಿತ್ಯ ಸರ್ವಕಾಲಕ್ಕೂ ಶ್ರೇಷ್ಠವಾಗಿವೆ ಎಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಬುಧವಾರದಂದು ನಗರದ ಕುಂಬಾರ ಗಲ್ಲಿಯ ಭಗತಸಿಂಗ್ ವೃತ್ತದಲ್ಲಿ ತಾಲೂಕಾಡಳಿತ, ನಗರ ಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಾನ ದಾರ್ಶನಿಕ ಕವಿ ಸರ್ವಜ್ಞ ಅವರು ಜಯಂತಿ ಉತ್ಸವದಲ್ಲಿ ಅವರು ಮಾತನಾಡಿದರು. ಸರ್ವಜ್ಞ ಕವಿ ದಾರ್ಶನಿಕನಾಗಿ, ಮಹಾನ ಸಂತನಾಗಿ, ಎಲ್ಲರಿಂದ ಎಲ್ಲವನ್ನು ಕಲಿತು, ತಮ್ಮ ವಚನಗಳ […]